ಮರಣ ಹೊಂದಿದೆ ಮನಸು

ಮರಣ ಹೊಂದಿದೆ ಮನಸು

ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ...
ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ ಮಾತನು ಆಡುವವರೇ ಇಲ್ಲ ಆದರೂ ನಾನಿರುವೇ ಒಳ್ಳೆಯ ಯೋಚಿಸುತ. ನಾನು ಎಂಬುದು ಬಿಟ್ಟು ನನ್ನವರು ಎಂದು ಯೋಚಿಸುತ್ತಿದ ನನಗೆ ಇಂದು ಬಿಡುಗಡೆಯ ದಿನ. ನನ್ನವರು ಎನ್ನುವವರು ಮನಸಿನಿಂದ ದೂರವಾದರೆ? ಇಲ್ಲ. ಆದರೆ ಮನಸೇ ಮರಣವಾದಾಗ ಇನ್ನೂ ಏನಾದರು ಇದೆಯೇ ಆ ಮನಸಿನಲಿ. ಯಾರಾದರೂ ಇರುವರೆ ಆ ಮನಸಿನಲಿ? ಅರಿವಿಲ್ಲ ಈ ಮನಸಿಗೆ. ಅದು ತಿಳಿದಿದ್ದರೆ ಇಂದು ಇಲ್ಲವಾಗುತ್ತಿತ್ತೆ ಈ ಮನಸು? ನೊಂದಿರುವ ನನ್ನ ನತದೃಷ್ಟ ಜೀವನಕ್ಕೆ ಯಾರಿಲ್ಲ. ಇದು ನನ್ನ ತಪ್ಪೇ? ನಾನು ಕೆಟ್ಟವನೇ? ಇತರರ ಹಿತವಾಗಿ ಬಯಸಿದ ನನ್ನ ಮನಸಿನ ತಪ್ಪೇ? ನನ್ನ ಬಗ್ಗೆ ಯೋಚಿಸದ ನಾನೇ ದುಷ್ಟನೇ? ತಪ್ಪು ಸರಿಗಳ ನಿರ್ಧಾರ ಮಾಡುವವನಾರು? ದೇವರು? ಏಕೋ ಅನಿಸುತ್ತಿದೆ ಆ ದೇವರೇ ನನ್ನ ಪರವಾಗಿ...

ಧರೆಯ ನಗು – ಕನ್ನಡ ಕವನ

ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ....
ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ. ಮುಂದಿನ ಪೀಳಿಗೆಗೂ ಈ ಭೂಮಿ ಅವಶ್ಯ. ನಮ್ಮನ್ನು ನಾವೇ ಅವನತಿಯ ಕಡೆಗೆ ದೂಡದೆ ಇರೋಣ. ನಿನ್ನ ನಗುವು ನಿರಂತರನಾ ನೀಡುವುದಿಲ್ಲ ಬೇಸರ ತುಟಿಗಳ ನಡುವಿನ ಅಂತರನೋಡಲು ನಾನು ಕಾತುರನೀನೊಬ್ಬಳೇ ಸುಂದರಹೊಳೆಯುವ ಮಧುವಿನ ಸಾಗರಎಲ್ಲಿರುವ ನಿನ್ನ ಪ್ರಿಯಕರಅವನನ್ನು ನೋಡುವ ಆತುರಸಂಜೆಯಲಿ ಕೆಂಪಾಗಿದೆ ಸಾಗರ ಮೇಲೆ ನೋಡು ದಿವಾಕರಸಂಜೆ ಬರುವನು ಚಂದಿರಅವನೇ ನನ್ನ ಪ್ರಿಯಕರ
Kannada Essay Namma Kere Nammura Kere ಕನ್ನಡ ಪ್ರಬಂಧ ನಮ್ಮ ಕೆರೆ ನಮ್ಮೂರ ಕೆರೆ

Kannada Essay Namma Kere Nammura Kere ಕನ್ನಡ ಪ್ರಬಂಧ ನಮ್ಮ ಕೆರೆ ನಮ್ಮೂರ ಕೆರೆ

ಸ್ವಾಭಾವಿಕವಾಗಿ ಬರುವ ಮಳೆಯ ನೀರನ್ನು ಸಂಗ್ರಹಿಸುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲೆಂಬ ದೃಷ್ಟಿಯಿಂದ ನೀರನ್ನು ಕೆರೆಗಳಿಗೆ ಹರಿಸಿಕೊಂಡು ಸಂಗ್ರಹಿಸಿ ಬಳಕೆ ಮಾಡುವುದು ವಾಡಿಕೆ. ನಮ್ಮ ಕೆರೆ ಅಂದರೆ ನಮ್ಮ ಊರಿನ ಕೆರೆ ಊರಿನ ಮಧ್ಯಭಾಗದಲ್ಲಿ...
ಸ್ವಾಭಾವಿಕವಾಗಿ ಬರುವ ಮಳೆಯ ನೀರನ್ನು ಸಂಗ್ರಹಿಸುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲೆಂಬ ದೃಷ್ಟಿಯಿಂದ ನೀರನ್ನು ಕೆರೆಗಳಿಗೆ ಹರಿಸಿಕೊಂಡು ಸಂಗ್ರಹಿಸಿ ಬಳಕೆ ಮಾಡುವುದು ವಾಡಿಕೆ. ನಮ್ಮ ಕೆರೆ ಅಂದರೆ ನಮ್ಮ ಊರಿನ ಕೆರೆ ಊರಿನ ಮಧ್ಯಭಾಗದಲ್ಲಿ ಇದೆ. ಗ್ರಾಮಸ್ಥರು ಬಹಳ ಮೊದಲು ಕೆರೆಯ ನೀರನ್ನು ಕುಡಿಯಲು ಮತ್ತು ಬಟ್ಟೆ ಒಗೆಯಲು ಬಳಸುತ್ತಿದ್ದರು. ಆದರೆ ಈಗ ನೀರಿನ ಅಭಾವ ಇಲ್ಲವಾದ್ದರಿಂದ ಈ ನೀರು ಕುಡಿಯಲು ಬಳಸುವುದಿಲ್ಲ.ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳು ಇಲ್ಲಿ ಆಟವಾಡುತ್ತಾರೆ. ಚೌತಿಯ ಸಂಧರ್ಭದಲ್ಲಿ ಇಲ್ಲಿಯೆ ಗಣಪತಿ ವಿಸರ್ಜನೆ ಮಾಡಲಾಗುತ್ತದೆ. ನಮ್ಮ ಊರಿನ ಯುವಕ ಯುವತಿಯರು ಸೇರಿ ಕೆಲವೊಮ್ಮೆ ಇಲ್ಲಿನ ಸ್ವಚ್ಚತೆ ಮಾಡುತ್ತಾರೆ. ಕೆರೆಯ ಸುತ್ತಲು ಕಟ್ಟೆಯನ್ನು ನಿರ್ಮಿಸಲಾಗಿದೆ. ಕೆರೆಯ ಸುತ್ತಲೂ ರಕ್ಷಣೆಗಾಗಿ ಗೋಡೆಯನ್ನು ನಿರ್ಮಿಸಿದ್ದಾರೆ. ಎಷ್ಟೋ ಊರುಗಳಲ್ಲಿ ಕೆರೆಗಳೇ ಕೃಷಿಯ ಮತ್ತು ಕುಡಿಯುವ ನೀರಿನ ಮೂಲಗಳಾಗಿರುತ್ತವೆ. ಆದ್ದರಿಂದ ನಾವೆಲ್ಲರೂ ಕೆರೆಗಳನ್ನು ರಕ್ಷಿಸಬೇಕು.