ಸ್ನೇಹಿತರಿಂದ ಸ್ನೇಹಿತೆಗಾಗಿ – ನಟಿ ಮೇಘನಾ ರಾಜ್ ‘ತತ್ಸಮ ತದ್ಭವ’ ಚಿತ್ರದ ಮೂಲಕ ನಟನೆಗೆ
ನಟಿ ಮೇಘನಾ ರಾಜ್ 'ತತ್ಸಮ ತದ್ಭವ' ಚಿತ್ರದ ಮೂಲಕ ನಟನೆಗೆ ಮೂರ್ನಾಲ್ಕು ವರ್ಷಗಳ ನಂತರ ವಾಪಸ್ಸಾಗುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮುಗಿದು, ಬಹುಶಃ ಜೂನ್ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ...
ನಟಿ ಮೇಘನಾ ರಾಜ್ 'ತತ್ಸಮ ತದ್ಭವ' ಚಿತ್ರದ ಮೂಲಕ ನಟನೆಗೆ ಮೂರ್ನಾಲ್ಕು ವರ್ಷಗಳ ನಂತರ ವಾಪಸ್ಸಾಗುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮುಗಿದು, ಬಹುಶಃ ಜೂನ್ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದವರಿಗೆ ಇದೆ, ಈ ಚಿತ್ರವು ಸ್ನೇಹಿತರೆಲ್ಲರೂ ಸೇರಿ ತಮಗಾಗಿ ಮಾಡಿದ್ದು ಎಂದು ಮೇಘನಾ ಇದೀಗ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು 'ನಿಜವಾದ ಸ್ನೇಹಿತರು ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುತ್ತಾರೆ. ಅಂಥದ್ದೇ ನಿಜವಾದ ಸ್ನೇಹಿತರು ನನ್ನ ಕಷ್ಟಕಾಲದಲ್ಲೂ ಜೊತೆಗೆ ನಿಂತಿದ್ದಾರೆ. ಅವರಿಂದಾಗಿಯೇ ಮತ್ತೆ ನಾನು ಸಿನಿಮಾ ಮಾಡುವಂತಾಯಿತು. ನನ್ನ ಪ್ರಕಾರ, ಇದು ಕೇವಲ ಕಂ ಬ್ಯಾಕ್ ಸಿನಿಮಾ ಅಥವಾ ರೀ-ಎಂಟ್ರಿ ಸಿನಿಮಾವಲ್ಲ, ನನ್ನ ಸಿನಿಮಾ ಕೆರಿಯರ್ನಲ್ಲಿ ಮತ್ತೊಂದು ಆಯಾಮ ಕೊಡುತ್ತಿರುವ ಸಿನಿಮಾ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ. ಮುಂದೆ ಇಂಥ ಪಾತ್ರಗಳು ಮತ್ತೆ ಸಿಗುತ್ತವೋ, ಇಲ್ಲವೋ ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮತ್ತೆ ಸಿನಿಮಾ ಮಾಡುವಂತಾಯಿತು. ಇದೊಂದು ಇನ್ವೆಸ್ಟಿಗೇಟಿವ್ ಡ್ರಿಲ್ಲರ್ ಚಿತ್ರ....